Monday 30 December 2013

ಶುಭಕಾಮನೆಗಳು

ಆತ್ಮೀಯರೇ,


ಹೊಸವರ್ಷದ ಶುಭಾಶಯಗಳು.

ಹೊಸತನ ನಿಮ್ಮನಾಳಲಿ! ಹೊಸದಾದ ಪಥಗಳಲ್ಲಿ ನಿಮ್ಮ ಹೆಜ್ಜೆಗಳು ಮೂಡಲಿ!!

ಯಾರೂ ತುಳಿಯದ ಹಾದಿ ನಿಮ್ಮದಾಗಲಿ - ನಿಮ್ಮತನವೇ ಎಲ್ಲೆಡೆ ಗೋಚರಿಸಲಿ.
ಯಾರನ್ನೂ ಅನುಕರಿಸದಂತಹ ಹೊಸತನ ನಿಮ್ಮಲ್ಲಿ ಕಾಣುವಂತಾಗಲಿ.
ನಿಮ್ಮ ಇಷ್ಟಾರ್ಥಗಳು ನೆರವೇರಲಿ
ಹೃದಯದ ಬಯಕೆಗಳು ಈಡೇರಲಿ
ಬಹುದಿನದ ಕನಸುಗಳು ನನಸಾಗಲಿ
ಯಾವ ಅನ್ಯಾಯವೂ, ಅನೀತಿಯೂ, ಕೊರತೆಯೂ ನಿಮ್ಮನಾಳದಿರಲಿ
ಎಲ್ಲವೂ ನ್ಯಾಯವಾಗಿಯೂ, ನೀತಿಯಾಗಿಯೂ, ಸಮೃದ್ಧವಾಗಿಯೂ ಇರಲಿ.
ದೇವರು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ
ತನ್ನ ಪ್ರಸನ್ನಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ,
ದೇವರು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ,
ನಿಮ್ಮ ಆಸಕ್ತ ಕ್ಷೇತ್ರಗಳು ವಿಸ್ತಾರವಾಗಲಿ
ನಿಮ್ಮ ಪರಿಶ್ರಮ, ಪ್ರಯಾಸಗಳು ಫಲಭರಿತವಾಗಲಿ!
ನಿಮ್ಮ ಯೋಜನೆಗಳು, ಉದ್ದೇಶಗಳು ಸಫಲವಾಗಲಿ!
ವೈಯುಕ್ತಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯ,
ಆತ್ಮೀಕ ಎಲ್ಲಾ ರಂಗಗಳಲ್ಲೂ ಯಶಸ್ಸು ನಿಮ್ಮದಾಗಲಿ,

ಇಂತಿ ಸದಾ ಆತ್ಮೀಯರ ಒಳಿತನ್ನೇ ಬಯಸುವ ನಿಮ್ಮವ
ಆತ್ಮೀಯ ಪಿ. ಪ್ರಕಾಶ್, ಮೈಸೂರು.

Sunday 1 December 2013

ಧಾರ್ಮಿಕ ನಂಬಿಕೆಗಳೇ ಬೇರೆ, ಮೌಡ್ಯತೆಯೇ ಬೇರೆ .






 ಧಾರ್ಮಿಕ ನಂಬಿಕೆಗಳೇ ಬೇರೆ, ಮೌಡ್ಯತೆಯೇ ಬೇರೆ .

ಮೌಡ್ಯತೆಗಳೂ ಧಾರ್ಮಿಕ ನಂಬಿಕೆಯ ಸೋಗಿನಲ್ಲಿ ಇದ್ದು ಕಲಬೆರಕೆಯಾಗಿದೆ. ಮೌಢ್ಯತೆಯೇ ಹಿಂದೂ ಧರ್ಮ ಎಂದು ತಪ್ಪು ಗ್ರಹಿಕೆಯುಳ್ಳವರಿಂದ ಆರೋಗ್ಯಯುತವಾದ ಸಮಾಜವನ್ನು ನಿರ್ಮಾಣಮಾಡಲು ಸಾದ್ಯವಿಲ್ಲ. ಮೌಡ್ಯತೆಯನ್ನು ಆದರಿಸುವ  ಬುದ್ಧಿಜೀವಿಗಳೇ ಜನರನ್ನು ಅದರಲ್ಲೂ ಯುವಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬೇಡಿ , ಸಾದ್ಯವಾದರೆ ಚೆನ್ನಾಗಿ ಅಭ್ಯಾಸ ಮಾಡಿ ಮೂಢ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಯ ವ್ಯತ್ಯಾಸವನ್ನು ಯುವ ಪೀಳಿಗೆಗೆ ತಿಳಿಸಲು ಪ್ರಯತ್ನಿಸಿ,  ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು, ಆರೋಗ್ಯಕರವಾದ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿ ಆದರೆ ಬಿಟ್ಟಿಯಾಗಿ ಪ್ರಸಿದ್ದಿಯಾಗಲು ಪ್ರಯತ್ನಿಸ ಬೇಡಿ.

 ಕರ್ನಾಟಕ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕವನ್ನು ಮಂಡಿಸಲು ಸಿದ್ಧತೆ ನಡೆಸಿರುವುದು ಕರ್ನಾಟಕದ ಪ್ರಬುದ್ಧ ಪ್ರಜೆಗಳೆಲ್ಲರೂ ಸ್ವಾಗತಿಸಬೇಕಾದ ವಿಚಾರವಾಗಿದೆ. ವಿಪರ್ಯಾಸವೆಂದರೆ ವಿಚಾರವಂತರೆನಿಸಿಕೊಂಡ ಅನೇಕರು ಸರ್ಕಾರದ ನಡೆಯನ್ನು ಟೀಕಿಸಿ ಮೂಢನಂಬಿಕೆ ಮತ್ತು ಮೌಡ್ಯತೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ದು:ಖದ ಸಂಗತಿ.

    ಬದಲಾಗಲಿ ಭಾರತ! ಪ್ರಬುದ್ಧ ಭಾರತ ನಿರ್ಮಾವಾಗಲಿ!!