ಧಾರ್ಮಿಕ ನಂಬಿಕೆಗಳೇ ಬೇರೆ, ಮೌಡ್ಯತೆಯೇ ಬೇರೆ .
ಮೌಡ್ಯತೆಗಳೂ ಧಾರ್ಮಿಕ ನಂಬಿಕೆಯ ಸೋಗಿನಲ್ಲಿ ಇದ್ದು ಕಲಬೆರಕೆಯಾಗಿದೆ. ಮೌಢ್ಯತೆಯೇ ಹಿಂದೂ ಧರ್ಮ ಎಂದು ತಪ್ಪು ಗ್ರಹಿಕೆಯುಳ್ಳವರಿಂದ ಆರೋಗ್ಯಯುತವಾದ ಸಮಾಜವನ್ನು ನಿರ್ಮಾಣಮಾಡಲು ಸಾದ್ಯವಿಲ್ಲ. ಮೌಡ್ಯತೆಯನ್ನು ಆದರಿಸುವ ಬುದ್ಧಿಜೀವಿಗಳೇ ಜನರನ್ನು ಅದರಲ್ಲೂ ಯುವಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬೇಡಿ , ಸಾದ್ಯವಾದರೆ ಚೆನ್ನಾಗಿ ಅಭ್ಯಾಸ ಮಾಡಿ ಮೂಢ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಯ ವ್ಯತ್ಯಾಸವನ್ನು ಯುವ ಪೀಳಿಗೆಗೆ ತಿಳಿಸಲು ಪ್ರಯತ್ನಿಸಿ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು, ಆರೋಗ್ಯಕರವಾದ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿ ಆದರೆ ಬಿಟ್ಟಿಯಾಗಿ ಪ್ರಸಿದ್ದಿಯಾಗಲು ಪ್ರಯತ್ನಿಸ ಬೇಡಿ.
ಕರ್ನಾಟಕ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕವನ್ನು ಮಂಡಿಸಲು ಸಿದ್ಧತೆ ನಡೆಸಿರುವುದು ಕರ್ನಾಟಕದ ಪ್ರಬುದ್ಧ ಪ್ರಜೆಗಳೆಲ್ಲರೂ ಸ್ವಾಗತಿಸಬೇಕಾದ ವಿಚಾರವಾಗಿದೆ. ವಿಪರ್ಯಾಸವೆಂದರೆ ವಿಚಾರವಂತರೆನಿಸಿಕೊಂಡ ಅನೇಕರು ಸರ್ಕಾರದ ನಡೆಯನ್ನು ಟೀಕಿಸಿ ಮೂಢನಂಬಿಕೆ ಮತ್ತು ಮೌಡ್ಯತೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ದು:ಖದ ಸಂಗತಿ.
ಬದಲಾಗಲಿ ಭಾರತ! ಪ್ರಬುದ್ಧ ಭಾರತ ನಿರ್ಮಾಣವಾಗಲಿ!!
No comments:
Post a Comment