ಯಾವುದೇ ಸಂಘ ಸಂಸ್ಥೆ
ಅಥವಾ ಸಂಘಟನೆ -
ಸಂಘ ಸಂಸ್ಥೆಗಳ ನೊಂದಾಣಾಧಿಕಾರಿಗಳಲ್ಲಿ ನೊಂದಾಯಿಸಿಕೊಂಡ ಮಾತ್ರಕ್ಕೆ ಆ ಸಂಘ ಅಥವಾ
ಸಂಘಟನೆ ಸದಸ್ಯರು ಗುಂಪಾಗಿ ಹೋಗಿ ಸಮಾಜ ವಿರೋಧಿ ವ್ಯಕ್ತಿಗಳನ್ನು
ಬಹಿರಂಗವಾಗಿ(ರಾಜಾರೋಷವಾಗಿ ಮಾಧ್ಯವದವರ ಎದುರು ವಿಡಿಯೋ ಚಿತ್ರಿಕರಿಸುತ್ತಾ) ಥಳಿಸುವುದಕ್ಕೆ ಅಥವಾ ನಿಂದಿಸುವುದಕ್ಕೆ ಹಕ್ಕು ಪಡೆದವರಾಗಿರುತ್ತಾರೆಯೇ?
ಈ ಘಟನೆಗಳನ್ನು ಸರ್ಕಾರ ಅನುಮೋದಿಸುತ್ತದೆಯೇ? ಕೊರಳಿಗೆ
ಯಾವುದಾದರೂ ಸಂಘಟನೆ ಗುರುತಿನ ಚೀಟಿ ಅಥವಾ ಸ್ಟೋಲ್ ಧರಿಸಿದ್ದರೆ ಅವರು ಸರ್ವ ಸಾಚಾಗಳೇ? ಆ ರೀತಿಯ ಸಂಘಟನೆಯನ್ನು ಯಾರೂ(ಸರ್ಕಾರ ಕೂಡ ಎದುರು ಹಾಕಿಕೊಳ್ಳಬಾರದೇ? ಈ ರೀತಿಯ ಘನಕಾರ್ಯಗಳು ಈ ನನ್ನ ಭವ್ಯಭಾರತದಲ್ಲಲ್ಲದೆ ಇನ್ಯಾವ ದೇಶದಲ್ಲಿ ನಡೆದೀತು?
ಹೀಗಾದರೂ ಹೆಮ್ಮೆಪಡಬಹುದೆಂದು ನಮ್ಮ ಘನ ಸರ್ಕಾರಗಳು ಮಾಧ್ಯಮಗಳಲ್ಲಿ ಸಾಕ್ಷಿ ಸಮೇತ
ಬಿತ್ತರಿಸಲ್ಪಟ್ಟರೂ ಕಣ್ಮುಚ್ಚಿ ಕುಳಿತಿದೆ ಅನ್ನಿಸುತ್ತಿದೆ! ಸಮಾಜ ವಿರೋಧಿ ಕಾರ್ಯ ಮಾಡಿದ ಪಾತಕಿಗಳನ್ನು
ಫೋಟೋ ಇಲ್ಲದಿದ್ದರೂ ಆತನ ಚಹರೆ ಹೇಗಿತ್ತು ಎಂದು ಮಾತುಗಳಲ್ಲಿ ಕೇಳಿ ಅದಕ್ಕೆ ನಾನಾ ಬಗೆಯ, ಭಂಗಿಯ ರೂಪ ಕೊಟ್ಟು, ಪಾತಕಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಮಾಡಿ ಪಾತಕಿಯನ್ನು ಖೆಡ್ಡಕ್ಕೆ
ಬೀಳಿಸುವ ಪೋಲೀಸ್ ಇಲಾಖೆಯ ಚಾಕಚಕ್ಯತೆ ಮೆಚ್ಚುವಂತದ್ದು ಆದರೆ ವಿಪರ್ಯಾಸವೆಂದರೆ, ಕಣ್ಣ ಮುಂದೆಯೇ ರಾಜಾರೋಷವಾಗಿ ಧರ್ಮದೇಟು ಸಂಸ್ಕೃತಿಯಲ್ಲಿ ತೊಡಗಿಸಿಕೊಂಡವರ ಮೇಲೆ ಯಾವುದೇ
ಶಿಸ್ತು ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದು ಯಾಕೆ?
ಈ ಧರ್ಮದೇಟು ಸಂಸ್ಕೃತಿ
ಹೀಗೆ ಮುಂದುವರಿದರೆ ಮುಂದೊಂದು ದಿನ
ಭ್ರಷ್ಟಾಚಾರಿ ಪೋಲೀಸ್ ಅಧಿಕಾರಿಗಳಿಗೆ
ಹೀಗೆ ಬಹಿರಂಗವಾಗಿ ಧರ್ಮದೇಟುಬಿದ್ದರೆ...?
ಭ್ರಷ್ಟಾಚಾರಿ ತಹಸೀಲ್ದಾರ್ ಗೆ
ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಭ್ರಷ್ಟಾಚಾರಿ ಜಿಲ್ಲಾದಿಕಾರಿಗೆ
ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಭ್ರಷ್ಟಾಚಾರಿ ಜನಪ್ರತಿನಿಧಿಗಳಿಗೆ
ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಭ್ರಷ್ಟಾಚಾರಿ ಗೃಹ ಸಚಿವನಿಗೆ
ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಭ್ರಷ್ಟಾಚಾರಿ ಪೋಲೀಸ್ ಅಧಿಕಾರಿಗಳಿಗೆ
ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಭ್ರಷ್ಟಾಚಾರಿ ಸಂಸದನಿಗೆ ಹೀಗೆ
ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಅಷ್ಟೇ ಯಾಕೆ ಭ್ರಷ್ಟಾಚಾರಿ ಮುಖ್ಯಮಂತ್ರಿಗೆ
ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಹೀಗೆ ಮುಂದುವರಿದರೆ
ಕಾನೂನು ಸುವ್ಯವಸ್ಥೆಗೆ ಕೋಟಿಗಟ್ಟಲೆ ಸರಕಾರ ವ್ಯಯಮಾಡುವ ಅದಕ್ಕಾಗಿ ಚಿಂತಿಸುವ ಪ್ರಮೇಯವೇ ಇರುವುದಿಲ್ಲ...!?
ಈಗಲಾದರೂ ಎಚ್ಚತ್ತುಕೊಳ್ಳಿ
ಮಾನ್ಯ ಮುಖ್ಯಮಂತ್ರಿಯವರೇ,
ಇಲಾಖಾ ಸಚಿವರೇ, ಅಧಿಕಾರಿಗಳೇ...ಸೊಗಸಾದ... ಶಿಸ್ತಾದ...
ಶಾಂತಿಯುತ... ಆರೋಗ್ಯಕರ ಸಮಾಜ ಸ್ಥಾಪಿಸಲು ಪಣತೊಡಿ.....
ತಡ ಮಾಡಿದರೆ ನಿಮ್ಮ
ಹಣೆಬರಹ.. ಯಾರಿಂದ ತಪ್ಪಿಸಲು ಸಾಧ್ಯ..?
No comments:
Post a Comment