Sunday 13 July 2014

ಈ ನಮ್ಮ ಮಾನ್ಯ ಸರ್ಕಾರಕ್ಕೆ ನಿಜವಾಗಲೂ ನಾಗರಿಕರ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ!

ಮೈಸೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡಿದ 622 ಚಾಲಕರ ಲೈಸೆನ್ಸ್ ರದ್ದು





 ಬೇಷ್ ! ಬೇಷ್ !! ಪೋಲೀಸ್ ಆಯುಕ್ತ ಡಾ. ಎಂ ಸಲೀಂ ರವರೇ,
ಈ ನಿಮ್ಮ ದಿಟ್ಟ ನಿರ್ಧಾರವನ್ನು ನೀವಲ್ಲದೇ ಇನ್ಯಾರೂ ಮಾಡುತ್ತಿರಲಿಲ್ಲ!

ಕುಡಿದು ವಾಹನ ಚಾಲನೆ ಮಾಡುವುದರಿಂದ ಅಪಘಾತವಾಗುತ್ತವೆ ಎಂಬ ವಿಚಾರ ಎಲ್ಲರಿಗೂ(ಕುಡಿದವರಿಗೂ) ತಿಳಿದ ಸಂಗತಿಯೇ.
ಆದರೂ ಮೊಂಡತನವಾಗಿ ವರ್ತಿಸುವವರಿಗೆ ಬುದ್ಧಿಬರುವುದು ಯಾವಾಗ? ಕುಡಿದು ವಾಹನ ಚಾಲನೆ ಮಾಡಿದವರು ಮಾತ್ರ ಸತ್ತರೆ ಪರವಾಗಿಲ್ಲ,
ಇತರೆ ನಾಗರಿಕರನ್ನೂ ಬಲಿ ತೆಗೆದುಕೊಳ್ಳುವುದೇ ದುರಾದೃಷ್ಟ.

ಈ ನಮ್ಮ ಮಾನ್ಯ ಸರ್ಕಾರಕ್ಕೆ ನಿಜವಾಗಲೂ ನಾಗರಿಕರ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ!

ಯಾವುದೋ ಮೂಲೆಯಲ್ಲಿ ನಿಂತು, ಗಾಡಿಗಳನ್ನು ಅಡ್ಡ ಹಾಕಿ, ’ಡ್ರಿಂಕ್ ಅಂಡ್ ಡ್ರೈವ್’  ತಪಾಸಣೆ ಮಾಡುವುದರಿಂದ ಸಂಪೂರ್ಣವಾಗಿ ಈ ಪೀಡೆಯನ್ನು ನೀಗಿಸಲು ಸಾಧ್ಯವಿಲ್ಲ.
’ಕುಡಿದು ವಾಹನ ಚಾಲನೆ ಮಾಡಿದವರ ಲೈಸೆನ್ಸ್ ರದ್ದು ಮಾಡಿದ್ದೇವೆ’ ಎಂಬುದೆಲ್ಲಾ ನಾಗರಿಕರನ್ನು ಮಂಕು ಮಾಡುವ ಅಥವಾ ವಂಚನೆ ಮಾಡುವ ವ್ಯವಸ್ಥಿತ ಹುನ್ನಾರ ಡಾ|| ಸಲೀಂ ರವರೇ,
ಪಾಪ ನೀವೇನ್ ಮಾಡ್ತೀರಾ, ನಿಮ್ಮದೇನಿದ್ದರೂ "ಅಲಿಖಿತ" ಆದೇಶ ಪಾಲಿಸುವುದಲ್ಲವೇ?
ಈ ರೀತಿಯ "ಅಲಿಖಿತ" ಆದೇಶ ಪಾಲಿಸುವ ದುಷ್ಟ ವ್ಯವಸ್ಥೆ ನನ್ನ ಭವ್ಯ ಭಾರತದಲ್ಲಲ್ಲದೇ ಬೇರೆಲ್ಲೂ ಇರಲು ಸಾಧ್ಯವಿಲ್ಲ ಬಿಡಿ!

ನಿಜವಾಗಲೂ ಮಾನ್ಯ ಸರ್ಕಾರಕ್ಕೆ ನಾಗರಿಕರ ಕುರಿತು ಕಾಳಜಿಯಿದ್ದರೆ, ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡಬೇಕೆನ್ನುವ ಧ್ಯೇಯವಿದ್ದರೆ, ತಾಕತಿದ್ದರೆ,
ಬಾರ್ ಗಳ ದ್ವಾರಗಳಲ್ಲಿ , ಆ ರಸ್ತೆಗಳಲ್ಲಿ (ಅರ್ಧ ಕಿ.ಮೀ ಸುತ್ತಳತೆಯ ಎಲ್ಲಾ ರಸ್ತೆಗಳಲ್ಲಿ ) ತಪಾಸಣೆಗಾಗಿ ಪೋಲೀಸ್ ತಂಡಗಳನ್ನು ನಿಲ್ಲಿಸಲು ಸಾಧ್ಯವೇ?
ಪೋಲೀಸ್ ಇಲಾಖೆಯ ಪ್ರಕಟನೆಯ ಪ್ರಕಾರ ಕೇವಲ 622 ಮಂದಿ ಚಾಲಕರು ಮಾತ್ರ ಕುಡಿದಿದ್ದರೆ ನಗರದಲ್ಲಿ
ಇಷ್ಟೊಂದು ಪ್ರಮಾಣದ ಬಾರ್ ಗಳು ವ್ಯವಹಾರ ನಡೆಸಲು ಸಾಧ್ಯವಾಗುತ್ತಿರಲಿಲ್ಲ!!! ನಿಮ್ಮ ತಪಾಸಣೆ, ಪ್ರಕಟಣೆಗಳೆಲ್ಲವೂ ವಾಸ್ತವಿಕತೆಗೆ ತಾಳೆಯಾಗುವುದಿಲ್ಲ, ಅದು ಕೇವಲ ಕಣ್ಣೊರೆಸುವ ತಂತ್ರವಷ್ಟೇ!

No comments:

Post a Comment